ಚಿತ್ರ: ಪಾಲಿಟಿಕ್ಸ್ ಕಲ್ಯಾಣ
ನಿರ್ದೇಶನ : ಜೆ.ಎಂ ಪ್ರಹ್ಲಾದ್
ತಾರಾಗಣ: ಪಂಕಜ್ ಎಸ್ ನಾರಾಯಣ್, ವಿ.ಮನೋಹರ್, ಶಂಕರ್ ಅಶ್ವಥ್, ಮಿಮಿಕ್ರಿ ಗೋಪಿ, ಗಿರಿಜಾ ಲೋಕೇಶ್, ಮೈಸೂರು ರಮಾನಂದ್, ದತ್ತಾತ್ರೇಯ ಕುರುಹಟ್ಟಿ, ಸುನೇತ್ರ ಪಂಡಿತ್, ಹನುಮಂತೇ ಗೌಡ, ಪಾಪ ಪಾಂಡು ಚಿದಾನಂದ್, ನಾಗೇಂದ್ರ ಶಾ ಮತ್ತಿತರು
ರೇಟಿಂಗ್ : * 3/5
ಪಾಲಿಟಿಕ್ಸ್ ಕಲ್ಯಾಣ, ಕನ್ನಡದಲ್ಲಿ ಮೂಡಿ ಬಂದ ಮತ್ತೊಂದು ಕಂಟೆಂಟ್ ಆಧಾರಿತ ಚಿತ್ರ. ರಾಜಕೀಯ ವಿಡಂಬನೆಯ ಕುರಿತು ಚಿತ್ರದಲ್ಲಿ ಕಣ್ಣಿಗೆ ಕಟ್ಟುವ ಹಾಗೆ ತೆರೆಗೆ ತಂದುಕೊಟ್ಟಿದ್ದಾರೆ ನಿರ್ದೇಶಕ ಜೆ ಎಂ ಪ್ರಹ್ಲಾದ್.
ಕನ್ನಡದಲ್ಲಿ ಈಗ ಕಂಟೆಂಟ್ ಓರಿಯಂಟಲ್ ಚಿತ್ರಗಳದೇ ಕಾರುಬಾರು. ಅಂತಹ ವಿಭಿನ್ನ ಕಂಟೆಂಟ್ ವುಳ್ಳ ಕಥೆಯನ್ನು ಕಲ್ಯಾಣ" ಹೊಂದಿದೆ.
ಮದುವೆ ನೆಪದಲ್ಲಿ ಕಲ್ಯಾಣ ಮಂಟಪದಲ್ಲಿ ಗಂಡು ಮತ್ತು ಹೆಣ್ಣಿನ ಕಡೆಯವರು ಒಟ್ಟಿಗೆ ಮಾತನಾಡಿಕೊಳ್ಳುವುದು ಮತ್ತು ಅದರ ಸುತ್ತ ಸಾಗುವ ಕಥೆಯನ್ನು ಚಿತ್ರದ ಮೂಲಕ ಕಟ್ಟಿಕೊಡಲಾಗಿದೆ
ನಾಯಕ, ನಾಯಕಿ ಹಾಗೂ ಅದ್ದೂರಿ ಮೇಕಿಂಗ್ ಸಿನಿಮಾ ಅಲ್ಲ. ಇಬ್ಬರು ವಿರೋಧಿ ರಾಜಕೀಯ ನಾಯಕರು. ಮದುವೆ ಮೂಲಕ ಸಂಬಂಧ ನ್ನೂ ಬೆಳೆಸಿಕೊಳ್ಳುವ ತಯಾರಿ. ತಮ್ಮ ಹೆತ್ತವರು ಮದುವೆಯನ್ನು ರಾಜಕೀಯಗೊಳಿಸಿದ್ದಾರೆಂದು ತಿಳಿದು ಮದುವೆ ಮಂಟಪದಿಂದ ಓಡಿ ಹೋಗುವ ಹುಡುಗ- ಹುಡುಗಿ. ಮಕ್ಕಳ ಈ ನಡೆಯಿಂದ ಇಬ್ಬರು ರಾಜಕೀಯ ವಿರೋಧಿಗಳು ಒಂದಾಗುತ್ತಾರೆಯೇ ಎಂಬುದು ಚಿತ್ರದ ಕತೆ. ಇದರಲ್ಲಿ ಪೆÇೀಷಕ ಕಲಾವಿದರ ದೊಡ್ಡ ದಂಡೇ ಇದೆ ಎಂಬುದು ಈ ಚಿತ್ರದ ಪ್ಲಸ್ ಪಾಯಿಂಟ್.
ಚಿತ್ರವನ್ನು ಈಗಿನ ಕಾಲಕ್ಕೆ ತಕ್ಕಂತೆ ತೆರೆಗೆ ತರುವದಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಪಂಕಜ್ ಎಸ್ ನಾರಾಯಣ್, ವಿ.ಮನೋಹರ್, ಶಂಕರ್ ಅಶ್ವಥ್, ಮಿಮಿಕ್ರಿ ಗೋಪಿ, ಗಿರಿಜಾ ಲೋಕೇಶ್, ಮೈಸೂರು ರಮಾನಂದ್, ದತ್ತಾತ್ರೇಯ ಕುರುಹಟ್ಟಿ, ಸುನೇತ್ರ ಪಂಡಿತ್, ಹನುಮಂತೇ ಗೌಡ, ಪಾಪ ಪಾಂಡು ಚಿದಾನಂದ್, ನಾಗೇಂದ್ರ ಶಾ, ಸಸ್ಯ, ವಿಜಯ ಭಾಸ್ಕರ್, ನಿಶ್ಚಿತ ಶೆಟ್ಟಿ, ರಜನಿ, ತನುಜಾ ಮುಂತಾದವರು ತಮಗೆ ಸಿಕ್ಕ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಿದ್ದಾರೆ
ಜೆ.ಎಂ.ಪ್ರಹ್ಲಾದ್ ಅವರು ರಾಜಕೀಯ ವಿಡಂಬನೆಯ ಕಥೆಯನ್ನು ಹಾಸ್ಯದ ಮೂಲಕ ನಿರ್ದೇಶಕ ಕವಿ ರಾಜೇಶ್ ತೋರಿಸಿದ್ದಾರೆ. ಸಂಗೀತ ನಿರ್ದೇಶನದೊಂದಿಗೆ ಛಾಯಾಗ್ರಹಣ ಹಾಗೂ ಸಂಕಲನವನ್ನು ರೋಹನ್ ದೇಸಾಯಿ ಮಾಡಿದ್ದಾರೆ